
ಸುಬ್ರಹ್ಮಣ್ಯ ಫೆ.22: ಕುಕ್ಕೆ ಸುಬ್ರಹ್ಮಣ್ಯದ ಕೆ. ಎಸ್. ಅರ್. ಟಿ. ಸಿ ಬಸ್ ತಂಗುದಾನದ ನಂದಶ್ರೀ ವಾಣಿಜ್ಯ ಸಂಕೀರ್ಣದಲ್ಲಿ ಶ್ರೀ ರಾಘವೇಂದ್ರ ಬೇಕರಿ & ಕೋಲ್ಡ್ ಹೌಸ್ ಇಂದು ಶುಭಾರಂಭಗೊಂಡಿತು. ನಂದಶ್ರೀ ವಾಣಿಜ್ಯ ಸಂಕೀರ್ಣದ ಮಾಲಕರಾದ ಶ್ರೀಮತಿ ನಿರ್ಮಲ.ಬಿ ನೂತನ ಸಂಸ್ಥೆಯನ್ನು ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಸುಜಾತ, ಗುತ್ತಿಗಾರು ಪಿ.ಏ.ಸಿ.ಎಸ್ ವೆಂಕಟ್ ದಂಬೆ ಕೋಡಿ, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಭರತ್ ಮುಂಡೋಡಿ, ಹೋಟೆಲ್ ನ್ಯೂ ಮೈಸೂರ್ ಕೆಫೆ ಮಾಲಕರಾದ ಹರೀಶ್ ಕಾಮತ್, ಬಿಜೆಪಿ ಸುಳ್ಯ ಮಂಡಲ ಅಧ್ಯಕ್ಷ ವೆಂಕಟ್ ವಳಲಂಬೆ, ಸುಬ್ರಹ್ಮಣ್ಯದ ರಾಘವೇಂದ್ರ ಪ್ರಸಾದ್ ಹೋಟೆಲ್ ಮಾಲಕರದ ಯಜ್ಞೇಶ್ ಆಚಾರ್ಯ ಭಾಗವಹಿಸಿದರು.

ಗುತ್ತಿಗಾರು ಪಾರ್ವತಿ ಮೆಡಿಕಲ್ ನ ಮಾಲಕರಾದ ಮರಿಯಪ್ಪ ಮಾವಾಜಿ, ರವಿ ಕಕ್ಕೆ ಪದವು ಸಮಾಜ ಸೇವಾ ಟ್ರಸ್ಟಿನ ಸಂಸ್ಥಾಪಕರಾದ ಡಾ. ರವಿ ಕಕ್ಕೆ ಪದವು, ಅಖಿಲ ಭಾರತ ಅಯ್ಯಪ್ಪ ಸೇವಾ ಟ್ರಸ್ಟ್ ನ ಅಧ್ಯಕ್ಷ ಉಮೇಶ್ ಕೆ. ಏನ್, ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ಸದಸ್ಯ ಹರೀಶ್ ಹಿಂಜಾಡಿ, ಕುಕ್ಕೆ ಶ್ರೀ ಆಟೋ ಚಾಲಕ ಮಾಲಕರ ಸಂಘದ ಅಧ್ಯಕ್ಷ ವಿವೇಕಾನಂದ ದೇವರಗದ್ದೆ, ಬಿ ಎಂ ಎಸ್ ಆಟೋ ಚಾಲಕಮಾಲಕರ ಸಂಘದ ಅಧ್ಯಕ್ಷ ದಿನೇಶ್ ಶಿರಾಡಿ, ಕಲ್ಲುಗುಂಡಿ ರಾಘವೇಂದ್ರ ಬೇಕರಿ ಮಾಲಕರಾದ ಸುನಿಲ್ ಕುಮಾರ್ ಕಲ್ಲುಗುಂಡಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸುಬ್ರಮಣ್ಯ ರಾಘವೇಂದ್ರ ಬೇಕರಿಯ ಮಾಲಕರಾದ ಶ್ರೀಮತಿ ಮತ್ತು ಶ್ರೀ ಅನಿಲ್ ಕುಮಾರ್ ಅತಿಥಿಗಳನ್ನು ಬರಮಾಡಿಕೊಂಡರು ಕುಶಲಪ್ಪ ಪ್ರಾರ್ಥಿಸಿದರು. ಕು.ಪ್ರಜ್ಞಾ ಕಾರ್ಯಕ್ರಮ ನಿರೂಪಿಸಿದರು ದೀಪಕ್ ನಂಬಿಯಾರ್ ಸ್ವಾಗತಿಸಿದರು.