ಕುಕ್ಕೆ ಸುಬ್ರಮಣ್ಯದಲ್ಲಿ ಎರಡು ದಿನಗಳಿಂದ ವನಜ ಎಂಬ 48 ವಯಸ್ಸಿನ ಮಹಿಳೆ ಅಲ್ಲಿ ಇಲ್ಲಿ ಸುತ್ತಾಡುತ್ತಾ ಕುಮಾರಧಾರ ಹತ್ತಿರ ಮನನೊಂದು ಆತ್ಮಹತ್ಯೆಗೆ ಪ್ರಯತ್ನಿಸುವ ವೇಳೆ ಬಿಎಂಎಸ್ ಆಟೋ ಚಾಲಕ ಮಾಲಕರ ಸಂಘ ಹಾಗೂ ಸಮಾಜ ಸೇವಾ ಟ್ರಸ್ಟ್ ನ ಕೋಶಾಧಿಕಾರಿಯಾದ ಮಣಿಕಂಠನವರು ಇದನ್ನು ಗಮನಿಸಿ ತತಕ್ಷಣವೇ ರವಿ ಕಕ್ಕೆ ಪದವು ಸಮಾಜ ಸೇವಾ ಟ್ರಸ್ಟ್ ಅಧ್ಯಕ್ಷರಾದ ರವಿ ಕಕ್ಕೆ ಪದವು ರವರಿಗೆ ಮಾಹಿತಿ ನೀಡಿದರು

ತಕ್ಷಣವೇ ಬಂದು ಆ ಮಹಿಳೆಯನ್ನು ವಿಚಾರಿಸಿದಾಗ ಆ ಮಹಿಳೆ ಮನನೊಂದು ನಾನು ಸಾಯಬೇಕು ಎನ್ನುವ ದುಃಖವನ್ನು ತೋಡಿಕೊಂಡು.
ನಂತರ ರವಿ ಕಕ್ಕೆ ಪದವು ಹಾಗೂ ಮಣಿಕಂಠನವರು ಸೇರಿ ಸಂಬಂಧಪಟ್ಟ ಕುಟುಂಬಸ್ಥರನ್ನು ಸಂಪರ್ಕಿಸಿದಾಗ ಅವರ ಸಂಬಂಧಿಕರು ಕುಕ್ಕೆಸುಬ್ರಹ್ಮಣ್ಯಕ್ಕೆ ಬಂದು ಅವರ ಜೊತೆ ಮಾತನಾಡಿ ಅವರ ವಿಚಾರ ಬಗ್ಗೆ ಇವರ ತಿಳಿಸಿದರು.


ಅಲ್ಲದೆ ನಮ್ಮ ಮನೆಗೆ ಕರೆದುಕೊಂಡು ಹೋಗುತ್ತೇವೆ ಎಂದು ರವಿ ಕಕ್ಕೆ ಪದವು ಸಮಾಜ ಸೇವಾ ಟ್ರಸ್ಟ್ ಗೆ ಅಧ್ಯಕ್ಷರಿಗೆ ಮತ್ತು ತಂಡದವರಿಗೆ ಎಲ್ಲ ತರದ ಮಾಹಿತಿ ಕೊಟ್ಟು ವನಜ ಮಹಿಳೆಯನ್ನು ಕರೆದುಕೊಂಡು ಹೋದರು
ವರದಿ ಮಣಿಕಂಠ ಕುಕ್ಕೆ ಸುಬ್ರಮಣ್ಯ



