
ಕುಕ್ಕೆ ಸುಬ್ರಮಣ್ಯ ಮಾ.16: ಸುಬ್ರಮಣ್ಯ ರೋಟರಿ ಕ್ಲಬ್ ಗೆ ರೋಟರಿ ಜಿಲ್ಲೆ 3181 ರ ಜಿಲ್ಲಾ ಗವರ್ನರ್ ಎಚ್.ಆರ್. ಕೇಶವರವರು ಶನಿವಾರ ಅಧಿಕೃತ ಭೇಟಿ ನೀಡಿ ರೋಟರಿ ಕ್ಲಬ್ ಸುಬ್ರಹ್ಮಣ್ಯ ದಿಂದ ಮಾಡುವ ವಿವಿಧ ಕೊಡುಗೆಗಳ ಹಾಗೂ ಸಹಾಯಧನ ಹಸ್ತಾಂತರ ಮಾಡಿರುವರು. ಶನಿವಾರ ಬೆಳಗ್ಗೆ 9 ಗಂಟೆಗೆ ಪಂಜ ಸಿ.ಎ. ಬ್ಯಾಂಕ್ ಬಳಿ ಜಿಲ್ಲಾ ಗವರ್ನರ್ ಅವರನ್ನು ಸುಬ್ರಹ್ಮಣ್ಯದ ರೋಟರಿ ಕ್ಲಬ್ ನವರು ಬರಮಾಡಿಕೊಂಡರು. ರವಿ ಕಕ್ಕೆ ಪದವು ಸಮಾಜ ಸೇವಾ ಟ್ರಸ್ಟ್ ನ ಸಂಸ್ಥಾಪಕರಾದ ಡಾ. ರವಿ ಕಕ್ಕೆ ಪದವು ರವರು ತನ್ನ ಸ್ವಂತ ಖರ್ಚಿನಲ್ಲಿ ತೆಗೆದುಕೊಂಡ ಜಾಗವನ್ನು ತೀರ ಬಡತನದಲ್ಲಿರುವಂತಹ ಐತಪ್ಪ.ನಾಯ್ಕ್ ಎಂಬ ಫಲಾನುಭವಿಗೆ ರೋಟರಿ ಕ್ಲಬ್ ನ ಜಿಲ್ಲಾ ಗವರ್ನರ್ ರವರ ಮೂಲಕ ಹಸ್ತಾಂತರಿಸಲಾಯಿತು. ಈ ಸಂದರ್ಭದಲ್ಲಿ ರೋಟರಿ ಅಸಿಸ್ಟೆಂಟ್ ಗವರ್ನರ್ ಪುರಂದರ ರೈ, ಸುಬ್ರಹ್ಮಣ್ಯ ರೋಟರಿ ಕ್ಲಬ್ ನ ಅಧ್ಯಕ್ಷರು, ಪದಾಧಿಕಾರಿಗಳು, ಇನ್ನರ್ ವೆಲ್ ಕ್ಲಬ್ ನ ಅಧ್ಯಕ್ಷರು, ಸದಸ್ಯರುಗಳು ಹಾಗೂ ರೋಟರಿ ಕ್ಲಬ್ ನ ಎಲ್ಲ ಸದಸ್ಯರು ಹಾಜರಿದ್ದರು.