
ಸುಬ್ರಮಣ್ಯ, ಡಿ .31: ಕುಕ್ಕೆ ಶ್ರೀ ಸುಬ್ರಹ್ಮಣ್ಯದಲ್ಲಿ ನಡೆದ ವಾರ್ಷಿಕ ಜಾತ್ರೋತ್ಸವದ ನಂತರ ಅಲ್ಲಲ್ಲಿ ಶೇಖರಣೆಗೊಂಡ ಕಸದ ರಾಶಿ ಹಾಗೂ ಬಿದ್ದ ಕಸ ಕಡ್ಡಿಗಳನ್ನು ರವಿ ಕಕ್ಕೆ ಪದ ಸಮಾಜ ಸೇವಾ ಟ್ರಸ್ಟ್ ವತಿಯಿಂದ ಈ ದಿನ ರವಿವಾರ ಸ್ವಚ್ಛತಾ ಕಾರ್ಯಕ್ರಮದೊಂದಿಗೆ ಇಡೀ ಪರಿಸರವನ್ನು ಸ್ವಚ್ಛಗೊಳಿಸಲಾಯಿತು.ಜಾತ್ರೋತ್ಸವದಲ್ಲಿ ಭಕ್ತಾದಿಗಳು ಹಾಗೂ ಸಾರ್ವಜನಿಕರು ಎಲ್ಲಿಂದರಲ್ಲಿ ಕಸವನ್ನು ಹಾಕಿದ್ದರು. ಇಡೀ ಪರಿಸರ ಕಸದಿಂದ ತುಂಬಿಹೋಗಿತ್ತು. ಅದಲ್ಲದೆ ಅಲ್ಲಲ್ಲಿ ಪ್ಲಾಸ್ಟಿಕ್ ಬಾಟ್ಲಿಗಳು,ಚೀಲಗಳು, ತೊಟ್ಟಿಗಳು ಹಾಗೂ ಆಹಾರದ ಮೂಟೆಗಳು ಚದುರಿದ್ದು ಕೆಲವು ಕಡೆಗಳಲ್ಲಿ ಗಬ್ಬು ವಾಸನೆ ಕೂಡ ಬರುತ್ತಿತ್ತು. ಇದನ್ನ ಮನಗಂಡ ರವಿಕಕ್ಕೆ ಪದವು ಸಮಾಜ ಸೇವಾ ಟ್ರಸ್ಟ್ ನ ಸಂಸ್ಥಾಪಕ ಡಾl ರವಿಕಕ್ಕೆ ಪದವು ಹಾಗೂ ಸಮಾಜ ಸೇವಾ ಟ್ರಸ್ಟ್ ನ ಸದಸ್ಯರ ನೇತೃತ್ವದಲ್ಲಿ ಪರಿಸರವನ್ನು ಸ್ವಚ್ಚಗೊಳಿಸಿದರು.
ಅದಲ್ಲದೆ ಅವರುಗಳು ಕ್ಷೇತ್ರಕ್ಕೆ ಬರತಕ್ಕಂತಹ ಭಕ್ತಾದಿಗಳಲ್ಲಿ ವಿನಂತಿ ಮಾಡಿಕೊಂಡದೇನೆಂದರೆ, ಯಾರು ಕೂಡ ಕಸ ಕಡ್ಡಿಗಳನ್ನು, ಪ್ಲಾಸ್ಟಿಕ್ ಬಾಟ್ಲಿಗಳು ,ಚೀಲದ ಪಟ್ಟಣಗಳನ್ನ ಅಲ್ಲಲ್ಲಿ ಎಸೆಯದಿರಿ. ಪಕ್ಕದಲ್ಲಿ ಇರತಕ್ಕ ಡಸ್ಟ್ಬೀನ್ಗಳಲ್ಲಿ ಹಾಕಬೇಕು .ಹಾಗೂ ಸಣ್ಣ ಪುಟ್ಟ ಕಸ ,ಪ್ಲಾಸ್ಟಿಕ್ ,ಇತ್ಯಾದಿಗಳಿದ್ದಲ್ಲಿ ತಾವೇ ಅದನ್ನ ತಮ್ಮ ಬ್ಯಾಗಿನಲ್ಲಿ ಸೇರಿಸಿಕೊಂಡು ಎಲ್ಲಾದರೂ ಕಸದ ತೊಟ್ಟಿಗಳಿದ್ದಲ್ಲಿ ಹಾಕುವಂತೆ ಮನವಿ ಮಾಡಿದ್ದರು. ನಮೊಂದಿಗೆ ಅಶೋಕ್ ಕುಕ್ಕಾಪನ ಮನೆ ಏನೇಕಲು ರವರು ಸಹಕರಿಸಿದರು. ಪರಿಸರದಲ್ಲಿ ಕಸ ಕಡ್ಡಿಗಳನ್ನು ಬಿಸಡುವುದರಿಂದ ಪ್ರಾಣಿಗಳಿಗೆ ಅನಾರೋಗ್ಯ ಉಂಟಾಗುತ್ತದೆ. ಆದುದರಿಂದ ನಮ್ಮ ಪರಿಸರವನ್ನು ಸ್ವಚ್ಚವಾಗಿ ಇಟ್ಟುಕೊಳ್ಳೋಣ. ಅಲ್ಲದೆ ಎಲ್ಲಿ ಸ್ವಚ್ಛತೆ ಇದೆಯೋ ಅಲ್ಲಿ ದೇವರ ಸಾನಿಧ್ಯ ಇದೆ. ದೇವರ ಪಾವಿತ್ರತೆಯನ್ನ ಎಲ್ಲರೂ ಕಾಪಾಡಿಕೊಂಡು ಬರಬೇಕೆಂದು ವಿನಂತಿ ಮಾಡಿದರು.
