ಕುಕ್ಕೆ ಸುಬ್ರಮಣ್ಯ ದೇವಸ್ಥಾನ ಆಸು ಪಾಸಿನಲ್ಲಿ ತಿರುಗಾಡುತ್ತಿರುವ ಹೋರಿ ಇದು ಇದುವರೆಗೂ ಯಾರಿಗೂ ಕೂಡ ತೊಂದರೆ ಮಾಡಿಲ್ಲ ಹಾಗೂ ದೇವಸ್ಥಾನಕ್ಕೆ ಬಂದಂತ ಭಕ್ತರಿಗೋ ಕೂಡ ತೊಂದರೆ ಕೊಟ್ಟಿಲ್ಲ ಇನ್ನು ರಸ್ತೆಗಳಲ್ಲಿ ಯಾವ ವಾಹನಗಳು ಕೂಡ ಬಂದರು ಸೈಡ್ ನಿಲ್ಲುತ್ತಿತ್ತು ಆದರೆ ಇಂದು ತೊಂದರೆ ಕೊಡುತ್ತಿರುತ್ತಿಲ್ಲ ಯಾವ ವಾಹನಗಳಿಗೂ ಕೂಡ ಇದುವರೆಗೂ ಅಡ್ಡ ಬಂದಿಲ್ಲ ಆದರೆ ಇಂದು ಮಧ್ಯಾಹ್ನ ದ ಹೊತ್ತಿಗೆ ಸುಬ್ರಹ್ಮಣ್ಯದಿಂದ ಧರ್ಮಸ್ಥಳಕ್ಕೆ ಪ್ಯಾಸೆಂಜರ್ ಸರ್ವಿಸ್ ಮಹೇಂದ್ರ ಬೊಲೆರೋ ವಾಹನ ತೀರ ಅಜಾಗರುಕತೆಯಿಂದ ಚಲಿಸಿಕೊಂಡು ಭಾರತ್ ಪೆಟ್ರೋಲ್ ಪಂಪ್ ಬಳಿ ಬರುತ್ತಾ ಇರುವಾಗ ಹೋರಿಗೆ ಗುದ್ದಿ ಅಪಘಾತಕ್ಕೀಡಾಗಿದೆ.ಅಪಘಾತದ ರಭಸಕ್ಕೆ ಹೋರಿ ರಸ್ತೆಗೆ ಎಸೆಯಲ್ಪಟ್ಟು ಕಾಲಿನ ಮೂಳೆಮುರಿತ ಗೊಳಗಾಗಿದೆ, ಅದರ ಒಂದು ಕೊಂಬು ಮುರಿದಿದ್ದು, ಮೈ ಮೇಲೆ ತರುಚುಗಾಯಗಳಾಗಿದ್ದು ರಸ್ತೆಯಲ್ಲಿ ಬಿದ್ದಿರುವ ಹೋರಿಯನ್ನ ಕಂಡ ಸಾರ್ವಜನಿಕರು ರಸ್ತೆ ಪಕ್ಕದಲ್ಲಿ ಮಲಗಿಸಿ ನೀರು ಹಾಕಿ ಆರೈಕೆಮಾಡಿರುತ್ತಾರೆ
ಹಾವೇರಿಯಾ ಹಿರಿಯ ಪಶುವೈದ್ಯಾಧಿಕಾರಿಗಳು ಡಾ.ಯುವರಾಜ್ ಚವ್ಹಾಣ ಇಬ್ಬರು ಜೊತೆಗೂಡಿ ಹೋರಿಗೆ ಚಿಕಿತ್ಸೆ ನೀಡಿದ್ದಾರೆ. ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರ ಯಾತ್ರೆಗೆ ಬಂದಿರುವ ಓರ್ವ ಪಶು ವೈದ್ಯ ಹಿರಿಯಾ ಅಧಿಕಾರಿ ತನ್ನ ಕರ್ತವ್ಯ ಮೆರೆದಿರುವುದು ಎಲ್ಲರ ಪ್ರಶಂಸೆಗೆ ಪಾತ್ರರಾದರು ನಂತರ ಹೋರಿಯಾ ಹೆಚ್ಚಿನ ಚಿಕಿತ್ಸೆಗಾಗಿ ಇದೇ ಸಂದರ್ಭದಲ್ಲಿ ರವಿ ಕಕ್ಕೆ ಪದವು ಸಮಾಜ ಸೇವಾ ಟ್ರಸ್ಟ್ ವತಿಯಿಂದ ವಾಹನ ವ್ಯವಸ್ಥೆ ಕಲ್ಪಿಸಲಾಯಿತು ಊರಿನವರು ಸೇರಿ ಬಿಎಂಎಸ್ ಆಟೋ ಚಾಲಕ ಸಂಘ ಸಹಕಾರದೊಂದಿಗೆ ಹಾಗೂ ಗ್ರಾಮ ಪಂಚಾಯಿತಿ ಸಹಯೋಗದಲ್ಲಿ ಹೋರಿಯನ್ನು ಗೋ ಆಶ್ರಮಕ್ಕೆ ಕಡಬ ಪಶು ಚಿಕಿತ್ಸಾಲಯಕ್ಕೆ ಸಾಗಿಸುವ ವೇಳೆ ಗಾಯಗೊಂಡ ಹೋರಿಯು ಕೊನೆ ಉಸಿರೆಳೆದಿದೆ ನಂತರ ಸ್ಥಳಕ್ಕೆ ಆಗಮಿಸಿದ ಹೈವೇ ಪೆಟ್ರೋಲ್, ಪೊಲೀಸ್ ಎ. ಎಸ್. ಐ.ತೋಮಸ್ ಹಾಗೂ ಸಿಬ್ಬಂದಿಗಳು, ರವಿ ಕಕ್ಕೆ ಪದವು ಸಮಾಜ ಸೇವಾ ಟ್ರಸ್ಟ್ ರವಿಕಕ್ಕೆಪದವು ಮಣಿಕಂಠ ಸದಸ್ಯರು. ಹಾಗೂ ಸುಬ್ರಮಣ್ಯ ರಿಕ್ಷಾ ಚಾಲಕರು ಸಂಘದವರು ಮತ್ತು ಗ್ರಾಮ ಪಂಚಾಯಿತಿ. ನವೀನ್ ಶೆಟ್ಟಿ ಸುಬ್ರಹ್ಮಣ್ಯ ನಿವಾಸಿ, ಸ್ಥಳೀಯರು ಸೇರಿ ವಿಧಿ ವಿಧಾನ ಮೂಲಕ ಹೋರಿಯಾ ಮೃತ ದೇಹವನ್ನು ಸಮಾಧಿ ಮಾಡಲಾಯಿತು ಈ ಸಂಕ್ಷಿಪ್ತ ವರದಿಯನ್ನು
ಆಟೋ ಚಾಲಕರ ಸಂಘದ ಸದಸ್ಯರಾದ ನವೀನ್ ಶೆಟ್ಟಿ ಅವರು ರಾ ನ್ಯೂಸ್ ಚಾನೆಲ್ ಗೆ ಮಾಹಿತಿ ನೀಡಿದರು